<p>ಜೀವನದಲ್ಲಾಗಲಿ ಪ್ರಯಾಣದಲ್ಲಾಗಲಿ ನಮ್ಮ ಸ್ವಶಕ್ತಿಯ ಮೇಲೆ ನಮಗೆ ನಂಬಿಕೆ ಇರಬೇಕು&nbsp;ಅದುಬಿಟ್ಟು ಏನುಮಾಡಿದರೆ ಏನಾಗುತ್ತ್ತೊ ಎನ್ನುವ ವ್ಯರ್ಥ ಯೋಚನೆಗಳನ್ನು ಮಾಡುವುದರಿಂದ ಯಾವುದೇ ಮೇಲು ಜರುಗುವುದಿಲ್ಲ.&nbsp;ಅವರ ಯೋಚನೆಗಳಲ್ಲಾಗಲಿ ಕನಸುಗಳಲ್ಲಾಗಲಿ ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಬಿಟ್ಟು ಯೋಚಿಸಲಾಗದ ಬದುಕುಕುಗಳು ಹಸಿವಾದರೆ ಒಂದು ತುತ್ತು ಹೊಟ್ಟೆಗೆ ಅನ್ನ ಹಾಕಲು ಸಹಾ ಆಗದೇ ಇರುವವರು ಎವರೆಸ್ಟ್ ಎನ್ನುವ ಪದವನ್ನು ಉಚ್ಛರಿಸಲು ಸಹಾ ಧೈರ್ಯ ಮಾಡಲು ಆಗದೇ ಇರುವವರು.&nbsp;ಎವರೆಸ್ಟ್ ಶಿಖರವನ್ನೇ ಏರಿದರಲ್ಲವೇ ಇದು ಎಂತಹ ಸಾಧನೆ. ತಮ್ಮ ಕನಸುಗಳನ್ನು ನೆನಸುಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವೇ&nbsp;ಸರಿಯಾದ ಊಟ ವಾಸವಿರಲು ಒಂದು ಗೂಡು ಇಲ್ಲದ 'ತಾಂಡಾದ ಗಿರಿಜನ ಹುಡುಗಿಯ ಹೃದಯದ ಕೋಣೆಗಳಲ್ಲಿ ಶಿಖರವನ್ನು ಮೀರಿದ ಗುರಿಯನ್ನಿಟ್ಟುಕೊಂಡಿದ್ದರು.&nbsp;ತನ್ನ ಬಡತನವನ್ನು ಎವರೆಸ್ಟ್ ಶಿಖರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದಳು.&nbsp;ಶತಮಾನಗಳಿಂದ ತನ್ನ ಜಾತಿಯನ್ನು ಆಳಿದ ಬಿಸಿಯ ಕಿರಣಗಳಿಗೆ ನೆರಳಾಗಿ ಎವರೆಸ್ಟ್ ಶಿಖರವನ್ನು ಚತ್ರಿಯ ತರ ನೆರಳಾಗಿ ಪರಿವರ್ತಿಸಲು ಪ್ರತಿಜ್ಞೆ ಮಾಡಿದಳು.&nbsp;ತನ್ನ ಬಡತನದ ಉಕ್ಕಿನ ಪಂಜರವನ್ನು ಸಂಕಲ್ಪ ಬಲದಿಂದ ಮುರಿದು ಅಷ್ಟ ದಿಕ್ಪಾಲಕರ ಕಿವಿಯಲ್ಲಿ ತನ್ನ ವಿಜಯದ ಡೋಲುಗಳ ನಾದವನ್ನು ಸಗೌರವವಾಗಿ ಕೇಳಿಸಿದಳು ಪೂರ್ಣ.&nbsp;&nbsp;ಪ್ರಯತ್ನಪಟ್ಟರೆ ಏನನ್ನಾದರೂ ಸಾಧಿಸಬಹುದು ಎಂದುತಿಳಿಸಲು ದಾರಿದೀಪದಂತೆ ಇತಿಹಾಸದಲ್ಲಿ ಬರೆದಿಡುವ ಹೆಸರು ಮಲಾವತ್ ಪೂರ್ಣ.&nbsp;ಈ ಜಗತ್ತಿಗೆ ಯಾರ ಹುಟ್ಟು ಹೊಸದಲ್ಲ ಯಾರ ಮರಣವೂ ಅಂತ್ಯವೂ ಅಲ್ಲ ನಮ್ಮೆಲ್ಲರ ಬದುಕುಗಳು ಸೃಷ್ಟಿಗೆ ಸಮಾನವೇ .ಚರಿತ್ರೆ ಸೃಷ್ಟಿಸುವ ತರಹಾ ಜೀವನವನ್ನ ಪರಿವರ್ತಿಸಲು ತಯಾರು ಮಾಡಕೋಬೇಕಾಗಿದ್ದು ನಾವೇ.&nbsp;ಜೀವನದ ದಾರಿಯಲ್ಲಿ ಪ್ರಯಾಣಿಸುವವರಿಗೆ ಧೈರ್ಯ ಸಾಹಸ ತಾಳ್ಮೆ ಇರಬೇಕು ಪ್ರತಿಯೊಂದು ಬದಲಾವಣೆ ನಿನ್ನ ಶ್ರದ್ಧೆಗೆ ಪ್ರತಿಸ್ಪಂದಿಸುತ್ತದೆ.</p>
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.