ರಂಗಕರ್ಮಿ ಮೌನೇಶ್ ಬಡಿಗೇರ್ ಕನ್ನಡದ ಬಹು ಒಳ್ಳೆಯ ಕತೆಗಾರರೂ ಹೌದು. ಅವರ ಮೊದಲ ಕಥಾಸಂಕಲನವಾದ ಈ ಕೃತಿಗೆ ಛಂದ ಪುಸ್ತಕ ಬಹುಮಾನ ದೊರೆತಿದೆ. ಅದನ್ನು ಆಯ್ಕೆ ಮಾಡಿದ ನಾಡಿನ ಹಿರಿಯ ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ ಅವರು ಅತ್ಯಂತ ಸಂಭ್ರಮದಿಂದ ಮತ್ತು ಸಂತೋಷದಿಂದ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಇದೇ ಕೃತಿಗಾಗಿ ಲೇಖಕರಿಗೆ ಅನಂತರ ಕೇಂದ್ರ ಸಾಹಿತ್ಯ ಅಕಾದೆಮಿಯ ಯುವ ಪುರಸ್ಕಾರವೂ ಸಂದಿತು.A Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ